ಇಂತಹ ಪದ್ಯಗಳಲ್ಲಿ ರಸವೆಂಬುದು ಕಡಿಮೆಯೇ! ಪಾಷಾಣದಿಂದೆಂತು ರಸಮೊಸರುವುದು!! ಆದರೆ ಕವಿಯ ಪಾಂಡಿತ್ಯ ವ್ಯುತ್ಪತ್ತಿಗಳಿಗೆಲ್ಲ ನಿಕಷವಾಗಿ ತೋರುವ ಇಂತಹ ಪದ್ಯಗಳೂ ಕನ್ನಡಕಾವ್ಯಗಳಲ್ಲಿ ಸಂಸ್ಕೃತಪಂಡಿತರನ್ನೂ ಬೆಚ್ಚಿಬೀಳಿಸುವಂತೆ ಅಲ್ಲಲ್ಲಿ ಅಡಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗಾಗಿ ಅವುಗಳ ಕಡೆಗೂ ಸಹೃದಯರ ಕೃಪಾಕಟಾಕ್ಷ ಬೀಳಲಿ ಎಂಬ ಇಚ್ಛೆಯೊಡನೆ ಪದನ್ಯಾಸ ಮಾಡುವೆ-
ಶಾ||
ಮ.ವಿ||
ಜನಚಿತ್ತಾಹ್ಲಾದಪಾದಂ ಸಕಲಧರಣಿಭೃನ್ಮಸ್ತಕನ್ಯಸ್ತಮಾಗಿ-
ಮ.ವಿ||
| ಚಿತ್ರಕೃಪೆ-ಅಂತರ್ಜಾಲ |
ಕ್ಷರಸೇವ್ಯಂ ನಿಜವಿದ್ಯೆ ವಿಶ್ವವಿನುತಂ ಪಾದಂ ಸದಾಳಿಪ್ರಿಯಂ
ವರದಾನಂ ನತಭದ್ರಲಕ್ಷಣಪದಂ ಪದ್ಮಾನುಷಂಗಿತ್ವಮಾ
ಗಿರೆ ಪೆಂಪಚ್ಚರಿಯಾಗೆ ದೇವಗಣಪಂ ರಕ್ಷಿಕ್ಕೆ ಭೂಚಕ್ರಮಂ||೫||
(ಗಣಪತಿಯ ಪರವಾದ ಅರ್ಥ- ಶತ್ರುಗಳಿಗೆ ಭುಂಕರವಾದ ದೀರ್ಘವಾದ ಸೊಂಡಿಲುಳ್ಳವನು, ಉಲ್ಲಸಿತವಾದ ನಾಗರಾಜನನ್ನು ಅಲಂಕಾರವಾಗಿ ಹೊಂದಿದವ ಮೂರ್ತಿ, ವಿದ್ವಾಂಸರಿಂದ ಸೇವಿತನಾದವನು, ಸಹಜವಾದ ವಿದ್ಯೆಯುಳ್ಳ ವಿಶ್ವವಿನುತವಾದ ಪಾದಗಳುಳ್ಳ, ಸದಾ ದುಂಬಿಗಳಿಗೆ ಪ್ರಿಯವಾದ ಮದಧಾರೆಯನ್ನು ಹೊಂದುಲಿರುವ, ನಮಸ್ಕರಿಸುವವರಿಗೆ ಮಂಗಳವನ್ನುಂಟುಮಾಡುವ, ಕಮಲವನ್ನು ಧರಿಸಿರುವ, ಅಚ್ಚರಿಯನ್ನುಂಟುಮಾಡುವ ಮಹಿಮೆಯುಳ್ಳ ದೇವನಾದ ಗಣಪನು ಭೂಮಿಯನ್ನು ರಕ್ಷಿಸಲಿ)
(ಕೃಷ್ಣನ ಪರವಾದ ಅರ್ಥ- ಶತ್ರುಗಳಿಗೆ ಭಯಂಕರವಾಗಿರುವ, ದೀರ್ಘವಾದ ಬಾಹುಗಳುಳ್ಳ, ಒಳ್ಳೆಯ ಅಲಂಕಾರಗಳನ್ನು ಹೊಂದಿರುವ, ಯೋಗಿಗಳಿಂದ ಸೇವಿತನಾದ,ವಿಶ್ವಸ್ತುತವಾದ ವಿದ್ಯೆಯಾದ, ಸದಾ ಸಜ್ಜನರಿಗೆ ಪ್ರಿಯವಾದ ಪಾದಗಳುಳ್ಳ, ವರದಾನ ಮಾಡುವ, ಭಕ್ತರಿಗೆ ಒಳ್ಳೆಯ ಸ್ಥಾನವನ್ನು ಕಲ್ಪಿಸುವ, ಲಕ್ಷ್ಮೀಸಮೇತನಾದ, ಆಶ್ಚರ್ಯವನ್ನು ಹುಟ್ಟಿಸುವಂತಹ ಮಹಿಮೆಯುಳ್ಳ, ದೇವಗಣಕ್ಕೆ ಒಡೆಯನಾದ ವಿಷ್ಣು ಭೂಮಂಡಲವನ್ನು ರಕ್ಷಿಸಲಿ.)
(ಬಲ್ಲಾಳರಾಯನ ಪರವಾದ ಅರ್ಥ- ಶತ್ರುಗಳಿಗೆ ರುದ್ರಸ್ವರೂಪನಾದ, ದೀರ್ಘವಾದ ಕರಗಳುಳ್ಳ, ಹೀನವಲ್ಲದ ಅಲಂಕಾರಗಲನ್ನು ಹೊಂದಿರುವ, ವಿದ್ವಜ್ಜನರಿಂದ ಸೇವ್ಯನಾದ, ವಿಶ್ವಸ್ತುತವಾದ ವಿದ್ಯೆಯುಳ್ಳ, ಸದಾ ಸಜ್ಜನರಿಗೆ ಪ್ರಿಯವಾದ ಪಾದವುಳ್ಳ, ವರದಾತನಾಗಿರುವ, ಆನತ ಜನರಿಗೆ ಮಂಗಳವನ್ನುಂಟುನಾಡುವ ಸ್ಥಾನದಲ್ಲಿರುವ, ಸಂಪತ್ತಿನಿಂದ ಕೂಡಿರುವ, ಆಶ್ಚರ್ಯವಾದ ಮಹಿಮೆಯುಳ್ಳ ದೇವಗಣಗಳಿಗೂ ಒಡೆಯನಾದ ಬಲ್ಲಾಳರಾಯನು ಭೂಮಿಯನ್ನು ರಕ್ಷಿಸಲಿ)
ಹಲವು ಕಾಲದಿಂದ ಡ್ರಾಫ್ಟನಲ್ಲಿದ್ದ ಈ ಲೇಖನಕ್ಕೆ ಮುಕ್ತಿ ಸಿಕ್ಕ ಕಾರಣ ಹೊಸದಾಗಿ ಶೀಘ್ರದಲ್ಲಿ ರಸಮಯವಾದ ಪದ್ಯಗಳನ್ನು ಮತ್ತೆ ಹಂಚಿಕೊಳ್ಳಲು ಪ್ರಾರಂಭಿಸುವೆ.
