Powered By Blogger

ಬುಧವಾರ, ಏಪ್ರಿಲ್ 11, 2012

ಭೂಕಂಪನ

ಚಿತ್ರಕೃಪೆ ಪದ್ಯಪಾನ



(ನನ್ನ ಚೊಚ್ಚಲ ಸೀಸ ಪದ್ಯ- ಭಾಷೆಯಲ್ಲಿ ಹಳೆ-ಹೊಸಗನ್ನಡಗಳೆಲ್ಲ ಸೇರಿ ಅಡುಗೆಯ ಹೊಸರುಚಿಪ್ರಯೋಗದಂತೆ ಆಗಿದೆ.) (ಇಂದು ಪದ್ಯ ಬರೆಯಲು ಪ್ರಾರಂಭಿಸಿದ ವೇಳೆಗೇ ಸುಮಾತ್ರದಲ್ಲಿ ಕಾಕತಾಳೀಯವಾಗಿ ಭೂಕಂಪನವಾದದ್ದು ವಿಷಾದನೀಯ:-( )

ಭೂದೇವಿ ಭಾರದಿಂ ರೋಸಿಹಳು ಮೇಣ್ ವಿಷ್ಣು -
ವಿರಹದಿಂ ತಪ್ತಳೆಂತೆಂಬವೋಲೇ |
ಶ್ರೀದೇವಿಯೊಡನಿರ್ಪ ಮಚ್ಚರದಿ ಕೊನರಿ ತಾ
ಪೊರಮಟ್ಟು ನಿಂತಳೈ ಹರಿಯ ಕಡೆಗೆ |
ಕಾದು ಸೂರ್ಯನ ಬಿಸಿಗೆ ಕುದಿದು ಬಡಬಾನಲಕೆ
ಕಂಪಿಸಿರ್ಪಳು ಜನರ ಕ್ರೂರ ನಡೆಯಿಂ |
ಗುಡುಗಿ ತಾ ಕೊಡವಿದಳು ಸೌಧಗಳನರೆ ಕ್ಷಣದಿ
ಜಠರಾಗ್ನಿಗಾಹುತಿಯನಿಕ್ಕುತಿರ್ಪಳ್ ||

ಕಾಲವಶವಾಗಿರಲು ಬಂಧುಜೀವಿಗಳೆಲ್ಲವೂ
ರೋದಿಸುವರಿತ್ತಕಡೆ ಬದುಕಿರ್ಪ ಬಾಂಧವರ್ಗಳ್|
ಏನೀ ವಿಪರ್ಯಾಸ ? ಮಾಳ್ಪ ತಪ್ಪಿಗೆ ಪಡೆದುದಂ
ಕಂಡು ದುಃಖವ ಪೊಂದಿ, ವಿಧಿಯ ನಿಂದಿಸುವುದಲ್ತೇ?
 -ಗಣೇಶ ಕೊಪ್ಪಲತೋಟ           

9 ಕಾಮೆಂಟ್‌ಗಳು:

  1. @prasad hegde:-) ನಾನು ಕನಸು ಕಂಡಿದ್ದೆಲ್ಲಾ ನನಸಾಗ್ತ ಎಂತನ ಹಾಂಗಾದರೆ!!

    ಪ್ರತ್ಯುತ್ತರಅಳಿಸಿ
  2. E manushya na athihase inda..namma tayyi bhudevi kophitagondidale alwaa enanthiya..?

    ಪ್ರತ್ಯುತ್ತರಅಳಿಸಿ
  3. http://padyapaana.com/?p=1093#comment-4319 ದಲ್ಲಿ ಈ ಪದ್ಯಕ್ಕೆ ಶತಾವಧಾನಿ ಆರ್ ಗಣೇಶ್ ಅವರ ಪ್ರತಿಕ್ರಿಯೆ-

    This very neat seesa-padya of DVG style. Even the language and contents are decent. However, I expect even more innovative and imaginative imagery in your versification as you are capable enough of doing it so! haNNiruva marakkE kallu beeruvudu!!!

    ಪ್ರತ್ಯುತ್ತರಅಳಿಸಿ